ಒಡಲಿನೊಡಲ ಗಾಳಿ ಬಸಿದು,
ಎದೆಯಗೂಡ ಜಗ್ಗಿ ಹಿಸಿದು,
ಎಲ್ಲೆಯಿಲ್ಲದಂತೆ ಕೊರೆವ ಮನದ ಮೂಕ ವೇದನೆ,
ಕಾಡದಿರಲಿ ನಿನ್ನನೆಂದೂ ಇಂಥದೊಂದು ಯಾತನೆ.
ಅಂತರಂಗದಂತರಂಗ ನೋವತಾಳದೇನೆ ಕುಸಿದು,
ಮನದಪದರದೊಳಗಿನಲರು ಶಾಂತಿಕಾಣದೇನೆ ಮೊರೆದು,
ಎಲ್ಲೆಯಿಲ್ಲದಂತೆ ಕೊರೆವ ಮನದ ಮೂಕ ವೇದನೆ,
ಕಾಡದಿರಲಿ ನಿನ್ನನೆಂದೂ ಇಂಥದೊಂದು ಯಾತನೆ.
ಮೆದುಳಿನಳಲ ಕಲಕಿ ಎಸೆದು,
ಜೀವದಾತ್ಮ ಬಿರಿದು ಬಸಿದು,
ಎಲ್ಲೆಯಿಲ್ಲದಂತೆ ಕೊರೆವ ಮನದ ಮೂಕ ವೇದನೆ,
ಕಾಡದಿರಲಿ ನಿನ್ನನೆಂದೂ ಇಂಥದೊಂದು ಯಾತನೆ.
ಆತ್ಮ ದೇಹ ತೊರೆದು ಹೊರಳಿ,
ಪಂಚಭೂತ ಮರಳಿ ಕೆರಳಿ,
ಎಲ್ಲೆಯಿಲ್ಲದಂತೆ ಕೊರೆವ ಮನದ ಮೂಕ ವೇದನೆ,
ಕಾಡದಿರಲಿ ನಿನ್ನನೆಂದೂ ಇಂಥದೊಂದು ಯಾತನೆ.
ಎದೆಯಗೂಡ ಜಗ್ಗಿ ಹಿಸಿದು,
ಎಲ್ಲೆಯಿಲ್ಲದಂತೆ ಕೊರೆವ ಮನದ ಮೂಕ ವೇದನೆ,
ಕಾಡದಿರಲಿ ನಿನ್ನನೆಂದೂ ಇಂಥದೊಂದು ಯಾತನೆ.
ಅಂತರಂಗದಂತರಂಗ ನೋವತಾಳದೇನೆ ಕುಸಿದು,
ಮನದಪದರದೊಳಗಿನಲರು ಶಾಂತಿಕಾಣದೇನೆ ಮೊರೆದು,
ಎಲ್ಲೆಯಿಲ್ಲದಂತೆ ಕೊರೆವ ಮನದ ಮೂಕ ವೇದನೆ,
ಕಾಡದಿರಲಿ ನಿನ್ನನೆಂದೂ ಇಂಥದೊಂದು ಯಾತನೆ.
ಮೆದುಳಿನಳಲ ಕಲಕಿ ಎಸೆದು,
ಜೀವದಾತ್ಮ ಬಿರಿದು ಬಸಿದು,
ಎಲ್ಲೆಯಿಲ್ಲದಂತೆ ಕೊರೆವ ಮನದ ಮೂಕ ವೇದನೆ,
ಕಾಡದಿರಲಿ ನಿನ್ನನೆಂದೂ ಇಂಥದೊಂದು ಯಾತನೆ.
ಆತ್ಮ ದೇಹ ತೊರೆದು ಹೊರಳಿ,
ಪಂಚಭೂತ ಮರಳಿ ಕೆರಳಿ,
ಎಲ್ಲೆಯಿಲ್ಲದಂತೆ ಕೊರೆವ ಮನದ ಮೂಕ ವೇದನೆ,
ಕಾಡದಿರಲಿ ನಿನ್ನನೆಂದೂ ಇಂಥದೊಂದು ಯಾತನೆ.
ಅತ್ತ್ಯುತ್ತಮ ಕವಿತೆ
ReplyDeleteDhanyavadagalu
Deleteಎಲ್ಲರಿಗೂ ಧನ್ಯವಾದಗಳು
ReplyDeleteNannantha badige maneyalliruva yallara manasina mooka vedane. Olle kavite
ReplyDeleteDhanyavadagalu tamma pratikrige
ReplyDeleteTumbaa chennaagi edhe sunil 😊
ReplyDeleteNice
ReplyDelete